- ಒಣಗಿಸಿ ಇಟ್ಟ ಮುರುಗುಲ ಹಣ್ಣಿನ ಸಿಪ್ಪೆ - 8
- ನೀರು - 1 Litre
- ನೀರು ಬೆಲ್ಲ - 1/2 ಕಪ್.
- ಉಪ್ಪು - ರುಚಿಗೆ ತಕ್ಕಷ್ಟು.
- ಜೀರಿಗೆ - 1/2 ಚಮಚ.
- ಇಂಗು - 2 ಚಿಟಿಕೆ.
- ತುಪ್ಪ - 1 ಚಮಚ
- ಕರಿಬೇವು - 5 ಎಸಳು.
ಮಾಡುವ ವಿಧಾನ :
- ಮುರುಗುಲು ಹಣ್ಣಿನ ಸಿಪ್ಪೆಯನ್ನು ನೀರಿಗೆ ಹಾಕಿ ೧೦ ನಿಮಿಷ ನೆನೆಸಿ.
- ನಂತರ ಅದಕ್ಕೆ ಬೆಲ್ಲ + ಉಪ್ಪು ಹಾಕಿ ೧೦ ನಿಮಿಷ ಕುದಿಸಿ.
- ಒಗ್ಗರಣೆ: ತುಪ್ಪ + ಇಂಗು + ಜೀರಿಗೆ ಹಾಕಿ ಒಗ್ಗರಣೆ ಮಾಡಿ. (ಜೀರಿಗೆ ಬದಲಿಗೆ ಬದಲಿಗೆ 4 ಎಸಳು ಬೆಳ್ಳುಳ್ಳಿಯನ್ನು ಒಗ್ಗರಣೆಯಲ್ಲಿ ಬಳಸಬಹುದು)
- ಈಗ ಕುದಿಯುತ್ತಿರುವ ಸಾರಿಗೆ ಒಗ್ಗರಣೆ ಹಾಕಿ, ಒಂದು ಕುದಿ ತರಿಸಿ ಗ್ಯಾಸನ್ನು ಬಂದು ಮಾಡಿ.
- ಬೇಕಾದರೆ ಕುದಿಯುವಾಗ ಸಾರಿಗೆ ಕರಿಬೇವನ್ನು ಹಾಕಿ ಕುದಿಸಬಹುದು.
- ಖಾರ ಬೇಕಾದವರು ಸಾರು ಕುದಿಯುವಾಗ 1/2 ಚಮಚ ಕೆಂಪುಮೆಣಸಿನ ಹುಡಿ ಹಾಕಬಹುದು.
- ಈಗ ಮುರುಗಲು ಹುಳಿ ಸಾರು ಸವಿಯಲು ತಯಾರು. :)
ಇತರೆ ಮಾಹಿತಿ:
- ನೆಗಡಿ, ಜ್ವರಕ್ಕೆ ಒಳ್ಳೆಯ ಮದ್ದು.
ಕೃಪೆ: ಆಶಾ. R. ಭಟ್, ಕುಮಟಾ
No comments:
Post a Comment